‘ಚಾರ್ಲಿ’ ಕನ್ನಡ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ತಿ ಆಗಿದ್ದು ಕೇವಲ ಒಂದು ಹಾಡನ್ನು ಮಾತ್ರ ಇದೆ ತಿಂಗಳ 12 ರಿಂದ ಮೂರು ದಿವಸಗಳ ಕಾಲ ತಾವರೆಕೇರೆಯ ಬೂತ್ ಬಂಗಲೆಯಲ್ಲಿ ಒಂದು ವಿಶೇಷ ಸೆಟ್ ಅಲ್ಲಿ ಸೆರೆ ಹಿಡಿಯಲಾಗುವುದು.
ಯೋಗರಾಜ್ ಭಟ್ ಹಾಗೂ ಸೂರಿ ಗರಡಿಯ ಶಿಷ್ಯ ಶಿವ ನಿರ್ದೇಶನದ ಚಿತ್ರ ಹಂಪಿಯಲ್ಲಿ ಪ್ರಾರಂಭವಾಗಿ ಸತತವಾಗಿ ಚಿತ್ರೀಕರಣವನ್ನು ಮಾಡಿದೆ.
ಜೀವನದಲ್ಲಿ ಪ್ರತಿಯೊಂದು ನಿಮಿಷವನ್ನು, ಪ್ರತಿಯೊಂದು ವಿಚಾರವನ್ನು ಸಂತೋಷದಿಂದ ಅನುಭವಿಸಬೇಕು ಎಂಬುದು ಸಿನೆಮಾದ ತಾತ್ಪರ್ಯ ಅಂತಾರೆ ನಿರ್ದೇಶಕ ಶಿವು. ಪಟ್ಟಣದಿಂದ ಹಳ್ಳಿಗೆ ಬಂದು ನಾಯಕ ಒಂದು ಬುದ್ದಿವಂತ ಹಾಗೂ ಇನ್ನೊಂದು ಮುಗ್ಧ ಚೆಲುವಿಯ ಸ್ನೇಹ ಆಗಿ ಮತ್ತಷ್ಟು ಬದಲಾವಣೆಗಳು ಆಗುತ್ತದೆ ಎಂದು ನಿರ್ದೇಶಕರು ಹೇಳುತ್ತಾರೆ.
ಚಿನ್ನ ಬೆಳ್ಳಿ ವ್ಯಾಪಾರದ ಚೆನ್ನಾರಾಯಪಟ್ಟಣದ ಮಂಜುನಾಥ್ ಅವರು ಈ ಚಿತ್ರದ ನಿರ್ಮಾಪಕರು. ಮದರಂಗಿ ಇಂದ ಫೇಮಸ್ ಆದ ಕೃಷ್ಣ ಚಿತ್ರದ ಕಥಾ ನಾಯಕ. ಹಾಸನದ ಮಿಲನ ‘ಬೃಂದಾವನ’ ನಂತರ ಒಪ್ಪಿಕೊಂಡಿರುವ ಚಿತ್ರ ‘ಚಾರ್ಲಿ’. ಗುರು ಚಿತ್ರದ ಮತ್ತೊಂದು ಮುಖ ಪಾತ್ರದಲ್ಲಿ ಇದ್ದಾರೆ. ಭಾಸ್ಕರ್ ಈ ಚಿತ್ರದಲ್ಲಿ ಖಳನಟ. ಗಿರೀಷ್ ಛಾಯಾಗ್ರಹಣ ಹಾಗೂ ವೀರ ಸಮರ್ಥ ಅವರ ಸಂಗೀತ ಒದಗಿಸಿದ್ದಾರೆ.